Saturday, August 23, 2008
Krishna
ಗಾಯನ: ಹರಿಹರನ್
ಹೇ ಹುಡುಗಿ ಹೇ ಹುಡುಗಿ
ನೀ ಹುಚ್ಚು ಹಿಡಿಸಬೇಡ ಕಣೆ
ಹೇ ದನಿಯೆ ಮಾರ್ದನಿಯೆ
ನೀ ಚುಚ್ಚಿ ಕೊಲ್ಲ ಬೇಡ ಕಣೆ
ನಿಜಾ ಹೇಳೆಯ ನಿಜಾ ಹೇಳೆಯ
ಯಾರೆ ನೀ ಯಾರೆ ನೀ
ಆ ಚಂದಮಾಮ ಕತೆಯ ಮೋಹಿನಿ
ಅದಾವಾ ಜನ್ಮದಂಟು ನಂಗೆ ನೀ
ಗುಟ್ಟಾಗಿ ಹರಿಯೊ ಗುಪ್ತಗಾಮಿನಿ
ಕಾಣದೂರ ಮಾಯಗಾತಿ ನೀ ನೀ
ಹೇ ಹುಡುಗಿ ಹೇ ಹುಡುಗಿ
ನೀ ಹುಚ್ಚು ಹಿಡಿಸಬೇಡ ಕಣೆ
ಮೋಡ ಬಸಿರುಗಟ್ಟಿ ಮಳೆಯು ಭೂಮಿ ಮುಟ್ಟಿ ಪೈರು
ಭಾವ ಹೃದಯ ತಟ್ಟಿ ಒಲುಮೆ ಚಿಲುಮೆ ಹುಟ್ಟಿ
ಪ್ರೀತಿ ಹಾಗೆ ಹುಟ್ಟಲಾರದು
ಹುಟ್ಟೊ ಗುಟ್ಟು ತಿಳಿಸಿ ಹೇಳದು
ಕಣ್ಣಾ ಮುಚ್ಚೆ ಆಟ ಆಡಬೇಡವೆ
ಕಣ್ಣಾ ಮುಂದೆ ಬಾರೆ ಕಣ್ಣು ತೆರೆಸುವೆ
ಹೇ ಹುಡುಗಿ ಹೇ ಹುಡುಗಿ
ನೀ ಹುಚ್ಚು ಹಿಡಿಸಬೇಡ ಕಣೆ
ಹೇ ದನಿಯೆ ಮಾರ್ದನಿಯೆ
ನೀ ಚುಚ್ಚಿ ಕೊಲ್ಲ ಬೇಡ ಕಣೆ
ನಿತ್ಯ ಆತ್ಮಹತ್ಯ ಮಾಡಿಕೊಳ್ಳುತಾನೆ ಸೂರ್ಯ
ಯಾರು ಕಾಡುತಾರೊ ಏನೊ ಅವನ ಎದೆಯ ಗಾಯ
ಹೆಣ್ಣು ಮಾಯೆ ಅಂದರು
ನೊಂದು ಬೆಂದು ಹೋದ ಮುಗ್ಧರು
ಆ ಮಾಯ ಜಿಂಕೆ ಹೇಗೆ ಹಿಡಿಯಲಿ
ಆ ಶಬ್ದವೇಧಿ ಎಲ್ಲಿ ಕಲಿಯಲಿ
ಹೇ ಹುಡುಗಿ ಹೇ ಹುಡುಗಿ
ನೀ ಹುಚ್ಚು ಹಿಡಿಸಬೇಡ ಕಣೆ
ಹೇ ದನಿಯೆ ಮಾರ್ದನಿಯೆ
ನೀ ಚುಚ್ಚಿ ಕೊಲ್ಲ ಬೇಡ ಕಣೆ
ನಿಜಾ ಹೇಳೆಯ ನಿಜಾ ಹೇಳೆಯ
ಯಾರೆ ನೀ ಯಾರೆ ನೀ
ಆ ಚಂದಮಾಮ ಕತೆಯ ಮೋಹಿನಿ
ಅದಾವಾ ಜನ್ಮದಂಟು ನಂಗೆ ನೀ
ಗುಟ್ಟಾಗಿ ಹರಿಯೊ ಗುಪ್ತಗಾಮಿನಿ
ಕಾಣದೂರ ಮಾಯಗಾತಿ ನೀ ನೀ
ಹೇ ಹುಡುಗಿ ಹೇ ಹುಡುಗಿ
ನೀ ಹುಚ್ಚು ಹಿಡಿಸಬೇಡ ಕಣೆ
Friday, August 22, 2008
ಚಿತ್ರ : ಶರಪಂಜರ
ಸಾಹಿತ್ಯ :ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ ಮತ್ತು ಸಂಗಡಿಗರು
ಸಂಗಡಿಗರು :
ಕಾವೇರಿ....ಕಾವೇರಿ....ಕಾವೇರಿ....
ಕಾವೇರಿ....ಕಾವೇರಿ....
ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ
ಪಿ.ಸುಶೀಲಾ :
ಕನ್ನಡ ಕುಲ ನಾರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಒಲವಿನ ಸಿಂಗಾರಿ
ಸಂಗಡಿಗರು :
ಆ ಹ...ಅ .....ಒ ...ಹೂ ಒ...
ಪಿ.ಸುಶೀಲಾ :
ಕೃಷಿ ಜನ ಜೀವನ ತಪೋ ನಿಧಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀನೇ ಜೇನಿನ ಜೀವನದಿ
ಪಿ.ಸುಶೀಲಾ :
ರೈತರ ಬಾಳಿನ ಭಾಗ್ಯನಿಧಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ನಡೆಯುವ ನೆಲವೆಲ್ಲ ಪುಣ್ಯದ ಸನ್ನಿಧಿ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಹಾಲಿನ ಅಲೆಯಾಗಿ ಆಡೋಳೆ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬಾಳಿನ ಸುವ್ವಾಲೆ ಆಡೋಳೆ
ಪಿ.ಸುಶೀಲಾ :
ಚಿನ್ನದ ನಾಡಿನ ಹೊನ್ನಾಳೆ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ನವರಸವಾಹಿನಿ ಗಿರಿಬಾಲೆ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಗಂಧದ ಸೀಮೆಯ ಸೌಂದರ್ಯಲಹರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಗಂಧರ್ವಗಾನದ ಆನಂದ ಲಹರಿ
ಪಿ.ಸುಶೀಲಾ :
ಪತಿತ ಪಾವನಿ ಅಮೃತ ಲಹರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಲಲಿತ ಲತಾವನಿ ಶೃoಗಾರ ಲಹರಿ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ
ಪಿ.ಸುಶೀಲಾ :
ಕನ್ನಡ ಕುಲ ನಾರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಒಲವಿನ ಸಿಂಗಾರಿ
ಚಿತ್ರ :ಶರಪಂಜರ
ಸಾಹಿತ್ಯ : ಡಾ.ದ.ರಾ.ಬೇಂದ್ರೆ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲಾ
ಡಾ.ಪಿ.ಬಿ.ಶ್ರೀನಿವಾಸ್:< br/>ಓ.......ಓ.......
ಪಿ.ಸುಶೀಲಾ:
ಆ.......ಆ.........
ಡಾ.ಪಿ.ಬಿ.ಶ್ರೀನಿವಾ ಸ್:
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಸುಶೀಲಾ:
ಸೂರ್ಯನ ಬಿoಬಕೆ ಚಂದ್ರನ ಬಿಂಬಾವೂ ರಮ್ಮಿಸಿ ನಗೆಯಲಿ ಮೀಸುತಿದೆ
ಡಾ.ಪಿ.ಬಿ.ಶ್ರೀನಿವಾಸ್:ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ
ಪಿ.ಸುಶೀಲಾ:
ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ
ಡಾ.ಪಿ.ಬಿ.ಶ್ರೀನಿವಾಸ್:
ತ ುoಬುತ ತುಳುಕುತ ತೀ ಡುತ ತನ್ನೊಳು ತಾನೇ ಸವಿಯನು ಸವಿಯುತಿದೆ
ಇಬ್ಬರೂ :
ತಾನೇ ಸವಿಯನು ಸವಿಯುತಿದೆ
ಪಿ.ಸುಶೀಲಾ:
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಸುಶೀಲಾ:
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಡಾ.ಪಿ.ಬಿ.ಶ್ರೀನಿವಾಸ್:
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಪಿ.ಸುಶೀಲಾ:
ಮಿತ್ರನ ಮೈತ್ರಿಯ ಹೊಸಗೆಮ ಕೆದರಿದೆ ಮರುಕದ ಧಾರೆಯ ಮಸೆಯಿಸಿತು
ಇಬ್ಬರೂ :
ಮರುಕದ ಧಾರೆಯ ಮಸೆಯಿಸಿತು
ಡಾ.ಪಿ.ಬಿ.ಶ್ರೀನಿವಾಸ್:
ಉ ತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಡಾ.ಪಿ.ಬಿ.ಶ್ರೀನಿವಾಸ್:ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ
ಪಿ.ಸುಶೀಲಾ:
ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ
ಡಾ.ಪಿ.ಬಿ.ಶ್ರೀನಿವಾಸ್:
ಬಿದ ಿಗೆಯ ತುಂಬಾ ಧರದಲಿ ಇಂದಿಗೂ ಮಿಲನದ ಚಿಹ್ನವು ತೋರದಿದೆ
ಇಬ್ಬರೂ :
ಮಿಲನದ ಚಿಹ್ನವು ತೋರದಿದೆ
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿoಬಕೆ ಚಂದ್ರನ ಬಿಂಬಾವೂ ರಮ್ಮಿಸಿ ನಗೆಯಲಿ ಮೀಸುತಿದೆ
Subscribe to:
Posts (Atom)