Friday, August 22, 2008

ಚಿತ್ರ : ಶರಪಂಜರ


ಸಾಹಿತ್ಯ :ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ ಮತ್ತು ಸಂಗಡಿಗರು

ಸಂಗಡಿಗರು :
ಕಾವೇರಿ....ಕಾವೇರಿ....ಕಾವೇರಿ....
ಕಾವೇರಿ....ಕಾವೇರಿ....

ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ
ಪಿ.ಸುಶೀಲಾ :
ಕನ್ನಡ ಕುಲ ನಾರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಒಲವಿನ ಸಿಂಗಾರಿ

ಸಂಗಡಿಗರು :
ಆ ಹ...ಅ .....ಒ ...ಹೂ ಒ...
ಪಿ.ಸುಶೀಲಾ :
ಕೃಷಿ ಜನ ಜೀವನ ತಪೋ ನಿಧಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀನೇ ಜೇನಿನ ಜೀವನದಿ
ಪಿ.ಸುಶೀಲಾ :
ರೈತರ ಬಾಳಿನ ಭಾಗ್ಯನಿಧಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ನಡೆಯುವ ನೆಲವೆಲ್ಲ ಪುಣ್ಯದ ಸನ್ನಿಧಿ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ

ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಹಾಲಿನ ಅಲೆಯಾಗಿ ಆಡೋಳೆ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬಾಳಿನ ಸುವ್ವಾಲೆ ಆಡೋಳೆ
ಪಿ.ಸುಶೀಲಾ :
ಚಿನ್ನದ ನಾಡಿನ ಹೊನ್ನಾಳೆ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ನವರಸವಾಹಿನಿ ಗಿರಿಬಾಲೆ
ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ

ಸಂಗಡಿಗರು :
ಆಆ.....ಆಆ.....
ಪಿ.ಸುಶೀಲಾ :
ಗಂಧದ ಸೀಮೆಯ ಸೌಂದರ್ಯಲಹರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಗಂಧರ್ವಗಾನದ ಆನಂದ ಲಹರಿ
ಪಿ.ಸುಶೀಲಾ :
ಪತಿತ ಪಾವನಿ ಅಮೃತ ಲಹರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಲಲಿತ ಲತಾವನಿ ಶೃoಗಾರ ಲಹರಿ
ಸಂಗಡಿಗರು :
ಆಆ.....ಆಆ.....

ಪಿ.ಸುಶೀಲಾ :
ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಬೆಡಗಿನ ವಯ್ಯಾರಿ
ಪಿ.ಸುಶೀಲಾ :
ಕನ್ನಡ ಕುಲ ನಾರಿ
ಡಾ.ಪಿ.ಬಿ.ಶ್ರೀನಿವಾಸ್ :
ಕಾವೇರಿ ನೀ ಒಲವಿನ ಸಿಂಗಾರಿ

No comments: